— Wikipedian ಸ್ತ್ರೀ —
Name
ಅನುಪಮ ಆನಂದ್
Born೧೩ ಮೇ ೨೦೦೦
ಬೆಂಗಲೂರು
Nationalityಇಂಡಿಯನ್
Countryಭಾರತ
Current locationಕರ್ನಾಟಕ
Languagesಕನ್ನಡ, ಆಂಗ್ಲ ಭಾಶೆ, ಹಿಂದಿ
Education and employment
High schoolಸಾಯಿ ಎಂಜಲ್ಸ್
Universityಕ್ರೈಸ್ಟ್ ಯೂನಿವರ್ಸಿಟಿ
Hobbies, favourites and beliefs
Religionಹಿಂದು
ಚಿಕ್ಕಮಗಳೂರು

ಪರಿಚಯ

edit

ಅನುಪಮ ಆನಂದ್ ಎಂಬುದು ನನ್ನ ಹೆಸರು . ನಾನು ಕ್ರೈಸ್ಟ್ ಯೂನಿವರ್ಸಿಟಿ[[1]] ಬಿ.ಎ ಮಡುತ್ತಾ ಇದ್ದಿನೀ. ನಾನು ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಓದಲು ಬಂದಿದ್ದೇನೆ.

ಓದು ಮತ್ತು ಸಾಧನೆಗಳು

edit

ನಾನು ಸಾಯಿ ಏನ್ಜಲ್ಸ್ ಶಾಲೆಯಲ್ಲಿ ನನ್ನ ಶಿಕ್ಷಣ ಮುಗಿಸಿ ಅಲ್ಲಿಯೆ ಪಿ.ಯು.ಸಿ[1] ಮುಗಿಸಿ ಇವಾಗ ಬೆಂಗಳೂರಿಗೆ ಬಂದಿದ್ದೇನೆ. ಶಾಲೆಯಲ್ಲಿ ಹಲವಾರು ಚರ್ಚಾ ಸ್ಪರ್ಧೆಗಳಲ್ಲಿ, ನ್ರಿತ್ಯ, ಹಾಡು ಮತ್ತು ಬರೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ. ಅದಕ್ಕೆ ಹಲವಾರು ಬಹುಮಾನವನ್ನು ಗೆದ್ದಿದೇನೆ. ನಾನು ಸ್ಪೆಲ್ಲಿಂಗ್ ಬೀನಲ್ಲಿ[2] ರಾಜ್ಯ ಮಟ್ಟದಲಿ ಭಾಗವಹಿಸಿದ್ದೇನೆ. ಶಾಲೆಯಲ್ಲಿ ನನಗೆ ಗಣಿತ[3] ಬಹಳ ಇಷ್ಟ್ ಆಗುತ್ತಿತು. ಆದರಿಂದ ಪಿ.ಯು.ಸಿನಲ್ಲಿ ವಿಗ್ನಾನದ ದಾರಿಯಲ್ಲಿ ಹೋಗಿ, ನನಗೆ ಇದು ಇಶ್ಟವಿಲ್ಲವೆಂದು ತಿಳಿದು ಈಗ ಬಿ.ಎ ಮಾಡುತ್ತ ಇರುವೆ. ನಾನು ಶಾಲೆಯಲ್ಲಿ ಸ್ಕೋಲ್ ಕಾಪ್ಟನ್ ಆಗಿದ್ದೆ. ಆಗ ನಾನು ಒಬ್ಬ ನಾಯಕಿಯಾಗಿ ಹೇಗೆ ಇರಬೇಕೆಂದು ಕಲಿತೆ. ಅಲ್ಲಿಯವರೆಗೆ ನಾನು ಜಾಸ್ತಿ ಮತಾಡುತಿರಲಿಲ್ಲ, ಧ್ಯರ್ಯವಿರಲ್ಲಿಲ. ಆದರೆ ಈಗ ಅದೆಲ್ಲ ಬದಲಾಗಿದೆ.

ಹವ್ಯಾಸಗಳು

edit
 
ಭರತನಾಟ್ಯ

ನಾನು ಗಿಟಾರ್ ಮತ್ತು ವೀಣೆ[[2]] ಕಲಿಯುತಿದ್ದೆ. ಆದರೆ ಅದು ಬಿಟ್ಟು ಹೊಯಿತು. ಅಲ್ಲದೆ ಕರ್ನಾಟಕ ಸಂಗೀತ[[3]] ಕಲಿತಿದ್ದೇನೆ. ಇವಾಗ ನಾನು ಭರತನಾಟ್ಯ[[4]] ಬಿಟ್ಟು ಕಥಕ್ ಕಲಿಯಲು ಶುರುಮಾಡಿದ್ದೇನೆ. ಕನ್ನಡ ಕಬ್ಬಿಣದ ಕಡಲೆಯೆಂದು ಅನ್ನಿಸುತಿತು. ಆದರೆ ಈಗ ಕನ್ನಡ ಸುಲಭಯೆಂದೆನಿಸುತದೆ. ನಾನು ಅದು ಬಿಟ್ಟು ಸಾಹಿತ್ಯ ಮತ್ತು ನಾಟಕಗಳನ್ನು ಓದಲು ಶುರುಮಾಡಿದೆ. ಹಲವಾರು ಕವಿಗಳು ಮತ್ತು ಬರಹಗಾರರ ಸಾಹಿತ್ಯವನ್ನು ಓದಿ, ಅದರಿಂದ ಸಾಕಷ್ಟು ಕಲಿತಿದ್ದೇನೆ. ಮುಂದೆ ಕ್ರಿಮಿನೋಲಜಿ ಓದುವುದು ನನ್ನ ಆಸೆಯಗಿದೆ. ಈಗೀಗ ನಾನು ಕವನ, ಚಿಕ್ಕ ಕಥೆಗಳು ಬರಿಯುವುದನ್ನು ಶುರುಮಡಿದ್ದೇನೆ. ಹೀಗೆ ಬರಿಯುವುದಿಂದ ನಾನು ಬೇರೆ ಬರಹಕಾರರು ಬರೆಯುವುದನ್ನು ಇನ್ನು ಚನ್ನಾಗಿ ಅರ್ಥ ಮಾಡಿಕೊಳ್ಳಬಲ್ಲೆ. ಇನ್ನು ನಾನು ತುಂಬ ಚನ್ನಾಗಿ ಬರಿಯುವುದು ಬರದಿದ್ದರೂ, ಕಲಿಯುವ ಪ್ರಯತ್ನ ಮಾಡುತ್ತಿದ್ದೇನೆ.

ಕುಟುಂಬ

edit

ನನ್ನ ಪೋಷಕರು ಚಿಕ್ಕಮಗಳೂರಿನಲ್ಲೆ ನೆಲೆಸಿದ್ದು, ನಾನು ಬೆಂಗಳೂರಿಗೆ ನನ್ನ ಜೀವನ ರೂಪಿಸಿಕೊಳ್ಳಲು ಬಂದಿರುವೆ. ಚಿಕ್ಕಮಗಳೂರಿನಲ್ಲಿ ನನ್ನ ಹದಿನಾರು ವರುಶದ ತಮ್ಮನಿದ್ದಾನೆ. ಈಗ ಅವನು ಹತ್ತನೆ ತರಗತಿಯಲ್ಲಿ ಓದುತ್ತಾ ಇರುವನು. ನನ್ನ ಬಳಿ ಒಂದು ಮುದ್ದಾದ ನಾಯಿಯು ಇತ್ತು. ಅದರ ಹೆಸರು ರೋನಿಯೆಂದು. ನನ್ನ ಸುಖ-ದುಖಃಗಳಲ್ಲಿ ಭಾಗಿಯಾದ ಆಪ್ತಮಿತ್ರ. ಆದರೆ ಹೋದ ವರುಶ ಆತ ವಿಧಿವಶನಾದ. ನನಗೆ ಬಹಳ ದುಖವಾಯಿತು ಆದರೆ ಈಗ ದುಖಃ ಹೋಗಿ ಅವನು ಇಲ್ಲಯೆಂಬುದನ್ನು ಅರ್ಥ ಮಡಿಕೊಂಡಿದ್ದೇನೆ. ನನಗೆ ತುಂಬ ಇಷ್ಟವಾದ ನೆನೆಪುಗಳು ಕಾಫಿ ಎಸ್ಟೆಟ್ ಅಲ್ಲಿ ನನ್ನ ಕುಟುಂಬದ ಜೊತೆ ಇದ್ದಿದ್ದು.

ಇರುವ ಊರು

edit
 
ಬೆಂಗಲೂರು ಅರಮನೆ

ಬೇಲೂರು ಚನ್ನಕೇಶವ ದೇವಸ್ಥಾನಕ್ಕೆ[4] ಸಾವಿರಾರು ಬಾರಿ ಹೋಗಿ ಆಟ ಆದುತ್ತಾ ದೇವರಿಗೆ ಪ್ರಾರ್ಥಿಸಿ, ಅಲ್ಲಿರುವ ಕೆತ್ತನೆಯನ್ನು ನೋಡಿ ಆಷ್ಚರ್ಯ ಪಟ್ಟು ಮನೆಗೆ ಬರುವುದು ರೊಢಿಯಾಗಿತ್ತು. ಗಿಡ, ಮರ, ಕಾಡು, ಬೆಟ್ಟ, ಗುಡ್ಡ, ಪ್ರಾಣಿ ಪಕ್ಷಿಗಳ ಜೊತೆ ಬೆಳದಿದ್ದೇನೆ. ಬೆಂಗಳೂರಿನಂತಹ ಮಹಾನಗರದಲ್ಲಿ[5] ಎಲ್ಲಿ ನೂಡಿದರೂ ಗಾಡಿ, ದೊಡ್ಡ ದೊಡ್ಡ ಮನೆಗಳು, ಅಪಾರ್ಟಮೆಂಟ್. ಗಿಡ, ಮರ, ಪ್ರಾಣಿ ಪಕ್ಷಿಗಳನ್ನು ಕಾಣುವುದೇ ಅಪರೂಪ. ನಾನು ಚಿಕ್ಕಮಗಳೂರಿನ ಆ ಶಾಂತಿ, ಸ್ವಛ್ಚ ಗಾಳಿ, ಅಲ್ಲಿಯ ಜನರನ್ನು ನೆನಪಿಸಿಕೊಳ್ಳುತ್ತೇನೆ. ಚಿಕ್ಕಮಗಳೂರಿನಂತ ಸಣ್ಣ ಊರಿನಲ್ಲಿ ಇದ್ದು ನಾನು ಜೀವನದ ಚಿಕ್ಕ ಚಿಕ್ಕ ಖುಷಿಗಳನ್ನು ತಿಳಿದು ಅದರಳ್ಳಿ ಮುಳುಗಿ ಜೀವನವನ್ನು ತುಂಬ ಸಂತೋಷದಿಂದ ನಡೆಸುವುದು ಹೇಗೆಯೆಂದು ನನಗೆ ತಿಳಿಯಿತು. ಚಿಕ್ಕಮಗಳೂರು[[5]] ಒಂದು ಚಿಕ್ಕ ಜಾಗ, ಅಲ್ಲಿರುವ ಎಲ್ಲಾ ಜನರು ಒಬ್ಬರನ್ನೋಬ್ಬರು ಗುರುತಿಸುತ್ತರೆ. ಅಲ್ಲರೂ ಬೆರೆಯವರಿಗೆ ಸಹಯ ಮಡ್ಡುತ ಒಂದು ಡೊಡ್ಡ ಕುಟುಂಬದಂತೆ ಇದ್ದಾರೆ. ಅದರಿಂದ ನಾನುಕೂಡ ಇವಾಗ ಎಲ್ಲರಿಗೂ ಎಶ್ಟಾಗುತ್ತೊ ಅಶ್ಟು ಸಹಯ ಮಾಡಲು ಪ್ರಯತ್ನಿಸುತ್ತೇನೆ.

ನನ್ನ ಮಂತ್ರ

edit

ಜೀವನದಲ್ಲಿ ಯಾವಾಗಲೂ ಕಲಿಯುತ್ತ ಇರಬೇಕು. ಅದನ್ನು ತುಂಬ ನೆನಪುಗಳಿಂದ, ನಗುಗಳಿಂದ, ತುಂಬಿಸಬೇಕು ಎಂಬುದು ನನ್ನ ನಂಬಿಕೆ. ಯಾವಾಗಲು ಕಲಿಯುತ್ತ, ನೆನಪುಗಳ್ಳನ್ನು ಮಾಡಿಕೊಳ್ಳುತ್ತಾ ಬದುಕಬೇಕು. ಜೀವನದಲ್ಲಿ ನಮ್ಮ ಮತ್ತು ನಮ್ಮ ಬಂಧುಗಳ ಸಂತೋಷವೇ ಎಲ್ಲಾದಿಕಿಂತ ಮುಖ್ಯ. ನಮ್ಮ ಜೀವನವನ್ನು ನಾವು ಗುರಿ ಕಂಡಂತೆ ಮಾಡಿಕೊಳ್ಳುವುದಕ್ಕೆ ಏನೇ ಕಷ್ಟ ಬಂದರೂ ಅದನ್ನು ಗೆದ್ದು ಗುರಿ ಮುಟ್ಟಬೇಕು ಎಂಬುದು ನನ್ನ ಮಂತ್ರ.

ಉಲೇಖನಗಳು

edit